ಕಾಯೋ ತಂದೆ

ಕಾಯೋ ತಂದೆಯೆ ಕಂದನ ಸದಯ
ಕನವರಿಸುತಲಿದೆ ನನ್ನೀ ಹೃದಯಾ || ಪ ||

ಕಾಲಿವು ಕೆಸರಲಿ ಹೂತಿವೆ ಜೀಯಾ
ತಲೆಯಿದು ಮುಗಿಲಿಗೆ ನೋಡುತಿದೆ
ಅರಳಿದ ಸುಮಗಳು ಅಣಕಿಪವೆನ್ನ
ಹಾರುವ ಹಕ್ಕಿಯು ಕರೆಯುತಿದೆ || ೧ ||

ಗಗನ ಕುಸುಮಗಳು ಕನಸಾಗುತಿವೆ
ಭೂಮಿಯ ಬವಣೆಯು ಹಿಂಡಿದೆ ಹರಣಾ
ಚೇತನ ಲತೆಯದು ಕಡುಬಾಡುತಿದೆ
ಯಾತನೆ ಬೆಂಕಿಯು ಕರೆದಿದೆ ಮರಣಾ || ೨ ||

ಆಸೆ ಚಿಕ್ಕೆಗಳು ಮೈಗರೆಯುತಿವೆ
ನಂಬಿಕೆ ನಾವೆಯು ಹೊಯ್ದಾಡುತಿದೆ
ಹಂಬಲ ಹಸಿವದು ಹಿಂಗದು ತಂದೇ
ನಿನ್ನಯ ಕಾಣದೆ ಬಳಲಿದೆ ಬೆಂದೆ || ೩ ||

ತಪ್ಪು ಹೆಜ್ಜೆಗಳು ಕತ್ತಲಿನೆಡೆಗೆ
ಸಾಗಿವೆ ಸುತ್ತಲು ಬಲೆ ಹೆಣೆದಿರಲು
ಕರೆವವರಿಲ್ಲದೆ ನಡೆಸುವವರಿಲ್ಲದೆ
ಕರೆದಿಹೆ ದೇವಾ ಹಗಲೂ ಇರುಳು || ೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರುಣನ ಕೇಳು
Next post ಬ್ರೇಕ್ಟನ The Caucasian Chalk Circle

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys